ಬಿಡುಗಡೆ

ಜೋಪಾನ, ಹುಷಾರು, ಮಗ ಬಹಳ ತುಂಟ
ಕೈ ಬಿಡಲೇಬೇಡ
ಬೀಳ್ಕೊಡಲು ಬಂದ ಎಲ್ಲರ ಮಾತಿಗೂ
ಹೂಂ ಗುಡುತ ಗಟ್ಟಿಯಾಗೇ ಮುಂಗೈ
ಹಿಡಿದು ನಿಲ್ದಾಣದೊಳಗಡೆ….
ಟಿಕೆಟ್ ಪಾಸ್ಪೋರ್ಟ್ ಬ್ಯಾಗೇಜ್
ಅದೂ ಇದೂ…..
ಮೂರು ತಾಸಿನ ಬಿಗಿಹಿಡತ ಬಿಡಿಸಿ
ವಿಮಾನದೊಳಹೊಕ್ಕು
ಕಿಡಕಿಯ ಕುರ್ಚಿಗೆ ಎತ್ತಿಹಾಕಿ
ಮತ್ತೆ ಬೆಲ್ಟ್ ಬಿಗಿದು ಹಗುರಾದೆ
ಮೂರು ವರ್ಷದ ಮಗನ ಕಣ್ತುಂಬ ನೀರು
ಬೆಲ್ಟ್ ಕಳಚಲು ಹರಸಾಹಸ.

ಎಷ್ಟೊಂದು ಬಿಕ್ಕಳಿಕೆ ಅದೆಷ್ಟು ಒದ್ದಾಟ
ಗಗನಸಖಿ ಕೊಟ್ಟ ಚಾಕ್ಲೆಟ್,
ನನ್ನ ಮುದ್ದು, ಪ್ರಯೋಜನಗೆ ಬರದೇ
ಒಂದೇ ಸಮನೆ ‘ಮನೆಗೆ ಹೋಗುವ’ ಪ್ರಲಾಪ;
ವಿಮಾನದ ಬೆಲ್ಟ್ ಲೈಟ್ ಆರಿ
ಸಮ ಪಾತಳಿಗೆ ಪಯಣ
ಮಗನ ಬೆಲ್ಟ್ ಬಿಚ್ಚಿದ್ದೆ ಸಾಕು
ಚಂಗನೆ ಸೀಟಿನಿಂದ ಜಿಗಿದು
ನಡು ಹಾದಿಯಲಿ ಓಡಾಡಿದ್ದೆ ಓಡಾಡಿದ್ದು.
ಹಿಡಿಯಲು ಹೋದಷ್ಟು ತಪ್ಪಿಸಿಕೊಳ್ಳುವಿಕೆ
ಉಳಿದ ಮಕ್ಕಳೂ ಒಂದೊಂದೇ
ವಿಮಾನದಂಗಳಕಿಳಿಯತೊಡಗಿದವು-
ನಿದ್ದೆ, ಮೋಡದೊಳಗೆ ಮಾಯ
ಮಗನ ಮುಖತುಂಬ ಚಂದ್ರ
ಕಣ್ತುಂಬ ಚುಕ್ಕೆಗಳ ಸಂಭ್ರಮ
ಕಾಲಿಗೆ ಚಕ್ರ-
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಿಶ್ವ ಸಂಚಾರಿ
Next post ಅವತಾರ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

cheap jordans|wholesale air max|wholesale jordans|wholesale jewelry|wholesale jerseys